ಪವಿತ್ರಾ ಗೌಡ ಹಾಗೂ ದರ್ಶನ್ ಅವರ ವಿಷಯ ಈಗ ಜಗಜ್ಜಾಗಿರ ಆಗಿರುವಂಥ ವಿಷಯ ಎಂದು ನಮಗೆಲ್ಲ ಗೊತ್ತೇ ಇದೆ. ಇವರಿಬ್ಬರ ಲವ್, ರಿಲೇಶನ್ಷಿಪ್ ಬಗ್ಗೆ ಆದ ಗಾಸಿಪ್ ಗಳು, ವಿವಾದಗಳು, ಇದರಿಂದ ವಿಜಯಲಕ್ಷ್ಮಿ ಅವರ ಮನಸ್ಸಿಗೆ ಆದ ನೋವು ಇದೆಲ್ಲವನ್ನು ನಾವು ನೋಡಿದ್ದೇವೆ. ದರ್ಶನ್ ಅವರು ಕಳೆದ ವರ್ಷ ಅಷ್ಟೆಲ್ಲಾ ನೋವು ಸಂಕಟ ಅನುಭವಿಸುವುದಕ್ಕೆ ಒಂದರ್ಥದಲ್ಲಿ ಪವಿತ್ರಾ ಅವರೇ ಕಾರಣ ಎಂದು ಹೇಳಿದರು ಸಹ ತಪ್ಪಲ್ಲ. ಅವರೇ ಅಂಥದ್ದೊಂದು ಕೆಲಸ ಮಾಡುವುದಕ್ಕೆ ಕುಮ್ಮಕ್ಕು ಕೊಟ್ಟಿರುವುದು. ಆ ಕೇಸ್ ಎಲ್ಲವು ಒಂದು ರೀತಿಯಲ್ಲಿ ಸಾಲ್ವ್ ಆಗಿ, ಪವಿತ್ರಾ ಗೌಡ ಹಾಗೂ ನಟ ದರ್ಶನ್ ಇಬ್ಬರು ಸಹ ಹೊರಗಡೆ ಬಂದಿದ್ದಾರೆ. ಆದರೆ ಇವರ ವಿಚಾರಗಳು ಮಾತ್ರಾ ವೈರಲ್ ಆಗುತ್ತಿದೆ. ವಿಜಯಲಕ್ಷ್ಮಿ ದರ್ಶನ್ ಅವರಿಗೆ ಪವಿತ್ರಾ ಗೌಡ ಟಾಂಗ್ ಕೊಟ್ಟಿದ್ದ ಪೋಸ್ಟ್ ವೈರಲ್ ಆಗಿದೆ..
ದರ್ಶನ್ ಅವರ ಜೊತೆಗೆ 10 ವರ್ಷಗಳಿಂದ ರಿಲೇಶನ್ಷಿಪ್ ನಲ್ಲಿ ಇರುವುದಾಗಿ ಪವಿತ್ರಾ ಗೌಡ ಪೋಸ್ಟ್ ಹಾಕಿದಾಗ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಬಹಳ ನೋವಾಗಿತ್ತು. ಬಳಿಕ ಅವರು ಪವಿತ್ರಾ ಗೌಡ ಮೊದಲ ಗಂಡನ ಜೊತೆಗಿರುವ ಪೋಟೋ ಶೇರ್ ಮಾಡಿ, ಆಕೆಗೆ ವಾರ್ನಿಂಗ್ ಕೊಟ್ಟು ಒಂದು ಪೋಸ್ಟ್ ಮಾಡಿದ್ದರು. ಒಂದು ಸಂಸಾರವನ್ನು ಹಾಳು ಮಾಡಬಾರದು ಎನ್ನುವ ಅರ್ಥದಲ್ಲಿ ಬರೆದುಕೊಂಡಿದ್ದರು ವಿಜಯಲಕ್ಷ್ಮೀ ದರ್ಶನ್. ಇದಕ್ಕೆ ಪವಿತ್ರಾ ಗೌಡ ಸಹ ಸುದೀರ್ಘವಾದ ಪೋಸ್ಟ್ ಬರೆದು, ವಿಜಯಲಕ್ಷ್ಮೀ ದರ್ಶನ್ ಅವರಿಗೆ ಟಾಂಗ್ ಕೊಟ್ಟಿದ್ದರು. ಹಳೆ ಪೋಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಹಳೆಯ ಪೋಸ್ಟ್ ನಲ್ಲಿ ಪವಿತ್ರಾ ಗೌಡ ಏನೆಂದು ಬರದಿದ್ದರು ಎಂದು ನೋಡುವುದಾದರೆ..
It’s time to Appreciate Smt.Pavithra Gowda. You can be transparent only when you are brave. Her bravery, transparency, support and love are appreciable.
byu/naane_bere inChitraLoka
“ನಾನು ಪವಿತ್ರ ಗೌಡ,ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ life ನಲ್ಲಿ ಉಂಟಾದ problems ಇಂದ ನಾನು ಸಂಜಯ್ ಅವರಿಂದ Divorce ಪಡೆದಿದೇನೆ. ಇಲ್ಲಿಯ ವರಗೂ ಖುಷಿ ಗೌಡ ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ!! ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ.plz Note this “I’m not here for any own personal needs and agenda”it’s all about pure love and care being for 10years it’s not at all easy ,,ಈ ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿರುತ್ತದೆ ಈ ವಿಚಾರವಾಗಿ ವಿಜಯಲಕ್ಷ್ಮಿರವರೆ ನನಗೆ ಹಲವಾರು ಸಾರಿ call ಮಾಡಿ ನನ್ನ ಬಳಿ ಮಾತನಾಡಿದ್ದು ವಿಜಯಲಕ್ಷ್ಮಿರವರಿಗೆ ಯಾವುದೇ ರೀತಿಯ problems ಇಲ್ಲವೆಂದು ತಿಳಿಸಿರುತ್ತಾರೆ. (ಅದರ ಕೆಲವು proofs ಹಾಗೂ ನನ್ನ Divorce documents ಸಮಯ ಬಂದಾಗ ಹಂಚಿಕೊಳ್ಳುತ್ತೇನೆ). ಇದೀಗ ವಿಜಯಲಕ್ಷ್ಮಿರವರು ನನ್ನ ವಿರುದ್ಧವಾಗಿ postಗಳನ್ನು ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ.
ನನ್ನ ಹಾಗೂ ನನ್ನ teenage ಮಗಳಾದ ಖುಷಿ ಗೌಡಳ ಬಗ್ಗೆ Vijayalakshmi darshan ಯಂಬ instagram post ನಲ್ಲಿ ಬಹಳಷ್ಟು ಜನ bad language ಇಂದ ನಿಂದಿಸುವುದು ನನಗೆ ಮಾನಸಿಕ ನೋವು ಉಂಟುಮಾಡಿದೇ. ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ personal photos post ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ ಈ ಮೂಲಕ ನಾನು ಹೇಳುವುದೇನೆಂದರೆ ನನಗೂ legal action ತಗೊಳೋ ಹಕ್ಕು ಇದೆ ,ಆದರೂ ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರ ಇರಲಿ❗ಕಾರಣ ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ. I hope you alll know about problems between them, what and all he had gone through.Even before,I came in to his life,. plz Recalll it 🙏 viji.darshan SELF-RESPECT IS MORE IMPORTANT THAN ANYTHING..” ಎಂದು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು ಪವಿತ್ರಾ ಗೌಡ. ಇದೀಗ ಈ ಪೋಸ್ಟ್ ಮತ್ತೊಂದು ಸಾರಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈಗ ಈ ಪೋಸ್ಟ್ ವೈರಲ್ ಆಗುತ್ತಿರುವುದಕ್ಕೆ ಒಂದು ಮುಖ್ಯವಾದ ಕಾರಣವಿದೆ. ಎಲ್ಲವೂ ನಾರ್ಮಲ್ ಆಗಿದ್ದಾಗ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಒಬ್ಬರು ಲವ್ ಬರ್ಡ್ಸ್ ಗಳ ಹಾಗಿದ್ದರು. ಬಹಳ ಸಂತೋಷವಾಗಿದ್ದರು. ಆದರೆ ಆ ದುರ್ಘಟನೆ ನಡೆದು, ದರ್ಶನ್ ಅವರು ಸಂಕಷ್ಟಕ್ಕೆ ಸಿಲುಕಿಕೊಂಡ ಬಳಿಕ ಎಲ್ಲವೂ ಬದಲಾಗಿದೆ. ಆ ವೇಳೆ ದರ್ಶನ್ ಅವರ ಜೊತೆಗೆ ನಿಂತಿದ್ದು ವಿಜಯಲಕ್ಷ್ಮಿ ಅವರು ಮತ್ತು ದರ್ಶನ್ ಅವರ ಕುಟುಂಬದವರು. ಎಷ್ಟೇ ಕಷ್ಟಗಳು ಬಂದರು ಸಹ ಭಯಪಡದೆ, ಧೃತಿಗೆಡದೆ ವಿಜಯಲಕ್ಷ್ಮಿ ಅವರು ತಮ್ಮ ಗಂಡನನ್ನು ಉಳಿಸಿಕೊಂಡರು. ದರ್ಶನ್ ಅವರನ್ನು ಸುರಕ್ಷಿತವಾಗಿ ಹೊರಗಡೆ ಕರೆದುಕೊಂಡು ಬರುವವರೆಗೂ ಬಿಡಲಿಲ್ಲ ವಿಜಯಲಕ್ಷ್ಮಿ ಅವರು. ಹಾಗಾಗಿ ಹೊರಗಡೆ ಬಂದಮೇಲೆ ದರ್ಶನ್ ಅವರು ಪೂರ್ತಿಯಾಗಿ ಬದಲಾಗಿದ್ದಾರೆ. ಪವಿತ್ರಾ ಗೌಡ ಅವರನ್ನು ಭೇಟಿ ಮಾಡಿಲ್ಲ.

ತಮ್ಮ ಪೂರ್ತಿ ಸಮಯವನ್ನು ಮಗ, ಹೆಂಡತಿ ಮತ್ತು ಕುಟುಂಬಕ್ಕೆ ಮೀಸಲಾಗಿ ಇಟ್ಟಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮೀ ದರ್ಶನ್ ಅವರ ಹುಟ್ಟುಹಬ್ಬ ನಡೆಯಿತು, ಅವರ ಬರ್ತ್ ಡೇ ಗೆ ಬಹಳ ಸ್ಪೆಷಲ್ ಆಗಿ ಸರ್ಪ್ರೈಸ್ ನೀಡಿದರು ನಟ ದರ್ಶನ್. ಅದ್ಧೂರಿಯಾಗಿ ಪತ್ನಿಯ ಹುಟ್ಟುಹಬ್ಬ ಆಚರಿಸಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಅವರು ಸಹ ಬಹಳ ಸಂತೋಷಪಟ್ಟು ಈ ವಿಚಾರವನ್ನು ಬರ್ತ್ ಡೇ ಸೆಲೆಬ್ರೇಷನ್ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡರು. ಇತ್ತೀಚೆಗೆ ಬಹಳ ಖುಷಿಯಾಗಿ ಹಲವು ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ ವಿಜಯಲಕ್ಷ್ಮಿ ದರ್ಶನ್ ಅವರು. ಇವರಿಬ್ಬರು ಇಷ್ಟೊಂದು ಖುಷಿಯಾಗಿ ಇರುವುದು ಪವಿತ್ರಾ ಗೌಡ ಅವರಿಗೆ ಸಹಿಸಲು ಸಾಧ್ಯ ಆಗುತ್ತಿಲ್ಲ ಎನ್ನುವ ಹಾಗೆ ತೋರುತ್ತಿದೆ. ಹಾಗಾಗಿ ಪವಿತ್ರಾ ಗೌಡ ಸಹ ಹಲವು ಅಪ್ಡೇಟ್ ಗಳನ್ನ ನೀಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಹಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ತಮ್ಮ ಬ್ಯುಸಿನೆಸ್ ಅನ್ನು ಮತ್ತೆ ಶುರು ಮಾಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿರುವ ಪವಿತ್ರಾ ಗೌಡ, ಅದಕ್ಕೆ ಸಂಬಂಧಿಸಿದ ಅಪ್ಡೇಟ್ ಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಮಗಳ ಜೊತೆಗೆ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ, ಕುಂಭಮೇಳಕ್ಕೆ ಹೋಗಿ ಪವಿತ್ರ ಸ್ನಾನ ಮಾಡಿ ಬಂದಿದ್ದಾರೆ. ಈ ಎಲ್ಲಾ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಹೊರಗಡೆ ಬಂದ ಮೇಲೆ ಸಹ ದರ್ಶನ್ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿ ಟ್ರೋಲ್ ಆಗಿದ್ದರು. ಇದೀಗ ದರ್ಶನ್ ಅವರು ಪತ್ನಿ ಜೊತೆಗೆ ಸಂತೋಷವಾಗಿ ಇರುವುದನ್ನು ನೋಡಿ ಇವರಿಂದ ಸಹಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ ಎನ್ನುವ ಹಾಗೆ ತೋರುತ್ತಿದೆ. ಈ ಕಾರಣಕ್ಕೆ ಪವಿತ್ರಾ ಗೌಡ ಅವರ ಹಳೆಯ ಪೋಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.