ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಇತ್ತೀಚೆಗೆ ಹಸುಗಳ ವಿಚಾರದಲ್ಲಿ ನಡೆದ ಘಟನೆ ಜನರಿಗೆ ಡಿಸ್ಟರ್ಬ್ ಆಗಿತ್ತು, ಹಸುವಿನ ಹಾಲು ಕುಡಿದು, ಹಸುವಿಗೆ ತಾಯಿ ಸ್ಥಾನ ಕೊಡುವ ಸಂಸ್ಕೃತಿ ನಮ್ಮದು, ಅಂಥದ್ರಲ್ಲಿ ಆ ಹಸುವಿನ ಕೆಚ್ಚಲನ್ನೇ ಕುಯ್ದು ವಿಕೃತಿ ಮೆರೆದ ಘಟನೆ ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಇದು ಸುಮ್ಮನೆ ಬಿಡುವಂಥ ವಿಷಯ ಅಲ್ಲ, ಈ ಪ್ರಕರಣದಲ್ಲಿ ಬಿಹಾರ ಮೂಲದ ಒಬ್ಬ ವ್ಯಕ್ತಿಯನ್ನು ಬಂಧಿ*ಸಲಾಗಿದೆ. ಹಾಗಿದ್ದರೂ ಸಹ, ಈ ಬಗ್ಗೆ ಹೆಚ್ಚಿನ ತನಿಕೆ ಆಗಬೇಕು ಜೊತೆಗೆ ಮುಂದೆ ಇಂಥ ಘಟನೆಗಳು ನಡೆಯದ ಹಾಗೆ ಎಚ್ಚರಿಕೆ ವಹಿಸಬೇಕು ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ.
ಹಸುವಿಗೆ ನಡೆದ ಈ ಘಟನೆಯ ಬಗ್ಗೆ ಕನ್ನಡದ ಹೆಚ್ಚಿನ ಸೆಲೆಬ್ರಿಟಿಗಳು ಮಾತನಾಡಿಲ್ಲ, ನಟಿ ಸುಧಾರಾಣಿ ಅವರು ತಾವು ಕರುವಿನ ಜೊತೆಗಿರುವ ಫೋಟೋ ಹಾಗೂ ತಮ್ಮ ಮಗಳು ಹಸುವಿನ ಜೊತೆಗಿರುವ ಒಂದು ಫೋಟೋ ಶೇರ್ ಮಾಡಿ, ಈ ಘಟನೆಯ ಬಗ್ಗೆ ಸಿಡಿದೆದ್ಧಿದ್ದಾರೆ. “ಒಬ್ಬ ಪ್ರಾಣಿ ಪ್ರೇಮಿಯಾಗಿ ಈ ಕೃತ್ಯಕ್ಕೆ ಸಂಬಂಧಿಸಿದ ಕೆಲವು Video ಗಳನ್ನ ನೋಡಿ, ಇದರ ಬಗ್ಗೆ ಓದಿ ನನ್ನಿಂದ ಸುಮ್ಮನೆ ಇರೋದಕ್ಕೆ ಸಾಧ್ಯವಾಗಲಿಲ್ಲ, ಸುಮ್ಮನೆ ಇರೋದು ಕೂಡ ತಪ್ಪು. ನಾವು ತಾಯಿ ಸ್ಥಾನ ಕೊಟ್ಟಿರೋ ಕಾಮಧೇನುವಿಗೆ ಹೀಗೆ ಅಮಾನವೀಯವಾಗಿ ಹಿಂಸೆ ಕೊಟ್ಟಿರೋದನ್ನ ನೋಡಿದ್ರೆ ಕರುಳು ಕಿವುಚಿ ಬರುವಷ್ಟು ಸಂಕಟ ಆಗತ್ತೆ. ಈಗಲಾದರು ಶಾಸಕಾಂಗ ಎಚ್ಚೆತ್ತುಕೊಳ್ಳಬೇಕು. ಕೆಟ್ಟದ್ದನ್ನೇ ಅರಿಯದ ನಾಯಿ, ಕುರಿ, ಹಸು, ಕುದುರೆ, ಕತ್ತೆ ಇಂಥ ಯಾವುದೇ ಮೂಕಪ್ರಾಣಿಗಳಿಗೆ, ಪಕ್ಷಿಗಳಿಗೆ ಹಿಂಸೆ ಕೊಡೋ ಕ್ರೂರಿಗಳಿಂದ 50 ರೂಪಾಯಿ ದಂಡ ಕಟ್ಟಿಸಿಕೊಂಡು ಬಿಟ್ಟುಬಿಡೋದಲ್ಲ.

ಇದು Bailable Offence ಕೂಡ ಅಲ್ಲ. ಎಷ್ಟೋ ಜನ ಪ್ರಾಣಿ ಪಕ್ಷಿ ಪ್ರೇಮಿಗಳು ಮೂಕಜೀವಿಗಳಿಗೆ ಹಿಂಸೆ ಕೊಡೋದು ಜಾಮೀನು ರಹಿತ ಅಪರಾಧ ಅನ್ನೋ ಕಾನೂನನ್ನ ತರೋದಕ್ಕೆ ಹೋರಾಟ ಮಾಡ್ತಾ ಇದ್ದಾರೆ. ಇಂಥ ಕ್ರೂರಿಗಳನ್ನ ಜೈಲಿನಲ್ಲಿಟ್ಟು ಸಾಕಬೇಕಾ? ಒಳಗಡೆ ಚೆನ್ನಾಗಿ ಊಟ ತಿಂಡಿ ಮಾಡ್ಕೊಂಡು ಆರಾಮಾಗಿ ಇರ್ತಾರೆ. ಇವರಿಗೆ 50 ರೂಪಾಯಿ, 50 ಸಾವಿರ ಅಂತ ದಂಡ ಹಾಕಿದ್ರೆ ಹೇಗೋ ಏನೋ ಮಾಡಿ, ಸಾಲ ಮಾಡಿ ಆದರೂ ದಂಡ ಕಟ್ಟಿ ಹೊರಗಡೆ ಬರ್ತಾರೆ. ಈ ಎರಡು ಶಿಕ್ಷೆಗಳಿಂದ ಯಾವುದೇ ಬದಲಾವಣೆ ತರೋಕೆ ಸಾಧ್ಯವಿಲ್ಲ, ಇಂಥವರಿಗೆ ಘೋರವಾದ ಶಿಕ್ಷೆ ಕೊಡಬೇಕಾದ ಅವಶ್ಯಕತೆ ಇದೆ. ಬೇರೆ ದೇಶಗಳಲ್ಲಿ ಇರೋ ಹಾಗೆ ನಮ್ಮ ದೇಶದಲ್ಲೂ ಪ್ರಾಣಿ ಪಕ್ಷಿಗಳ ಹಿಂಸೆ ಮಾಡೋರಿಗೆ ಕಠಿಣವಾದ ಶಿಕ್ಷೆ ಕೊಡಬೇಕು.
ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರಾಣಿಹಿಂಸೆ ಮಾಡೋರ ವಿರುದ್ಧ Criminal Record File ಆಗಬೇಕು. ಅವರು ಇನ್ನೇನೇ ಕೆಲಸ ಮಾಡೋಕೆ ಪ್ರಯತ್ನ ಪಟ್ಟರು ಇಂಥ ಕೆಲಸ ಮಾಡಿರೋದಕ್ಕೆ Criminal Background ಇರಬೇಕು. ಈ ಕ್ರಮ ಕೈಗೊಂಡಾಗ ಮಾತ್ರ ಈ ರೀತಿ ಮಾಡಬೇಕು ಅಂದುಕೊಳ್ಳೋರಿಗೆ ಯೋಚನೆ ಮಾಡೋಕೆ ಕೂಡ ಭಯ ಶುರುವಾಗತ್ತೆ. ಪ್ರಾಣಿಗಳಿಗೆ ಉಪಯುಕ್ತವಾಗೋ ಕಾನೂನನ್ನ ಈಗಲಾದರೂ ಜಾರಿಗೆ ತಂದರೆ ಮಾತ್ರ ಮುಂದೆ ಇಂಥ ಕೃತ್ಯಗಳು ನಡೆಯದೇ ಇರೋ ಹಾಗೆ ತಡೆಗಟ್ಟಬಹುದು..” ಎಂದು ನಟಿ ಸುಧಾರಾಣಿ ಅವರು ಸುದೀರ್ಘ ಬರಹ ಬರೆಯುವ ಮೂಲಕ ಈ ಘಟನೆಯ ಬಗ್ಗೆ ತಮಗಿರುವ ಅಸಮಾಧಾನ ಹೊರ ಹಾಕಿದ್ದಾರೆ. ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಹಸುವನ್ನು ಕಳೆದುಕೊಂಡ ಕರ್ಣ ಅವರ ಕುಟುಂಬಕ್ಕೆ 3 ಹಸುಗಳನ್ನು ನೀಡಿದ್ದಾರೆ.

ಕರ್ಣ ಅವರ ತಾಯಿ ಮತ್ತು ಸಹೋದರಿಗೆ ಹಸುವನ್ನು ನೀಡಲಾಗಿದ್ದು, ಅವರು ಇದನ್ನು ಸ್ವೀಕರಿಸಿದ್ದಾರೆ. ಆದರೆ ದಾನ ಕೊಟ್ಟಿದ್ದಾರೆ ಎಂದು ಈ ಘಟನೆಯನ್ನು ಹಾಗೆ ಬಿಡುವುದು ಸರಿಯಲ್ಲ. ಈ ಬಗ್ಗೆ ತನಿಖೆ ನಡೆಯಬೇಕು, ತಪ್ಪು ಮಾಡಿರುವವರಿಗೆ ಶಿಕ್ಷೆ ಸಿಗಬೇಕು ಎನ್ನುವುದು ಜನರ ಮನಸ್ಸಲ್ಲಿರುವ ಮಾತು. ಇಂಥದ್ದೊಂದು ಘೋರ ಘಟನೆ ನಡೆದಿದ್ದರು ಸಹ ಚಂದನವನದ ಬೇರೆ ನಟರು, ಕಲಾವಿದರು ಎಲ್ಲರು ಸೈಲೆಂಟ್ ಆಗಿರುವುದು ಯಾಕೆ ಎನ್ನುವ ಪ್ರಶ್ನೆ ಸಹ ಶುರುವಾಗಿದ್ದು, ಈ ರೀತಿಯ ಘಟನೆಗಳು ಮತ್ತೆ ನಡೆಯಬಾರದು ಎಂದರೆ ಎಲ್ಲರೂ ಧ್ವನಿ ಎತ್ತಿ, ಈ ವಿಚಾರದ ಬಗ್ಗೆ ಒಕ್ಕೊರಲಿನಿಂದ ಸರ್ಕಾರ ತನಿಖೆ ಮಾಡುವ ಹಾಗೆ ಮಾಡಿ, ಶಿಕ್ಷೆ ಕೊಡಿಸಬೇಕು.