Kishore Kumar and Madhubala: ಹಿಂದಿ ಚಿತ್ರರಂಗದ ಸುಂದರ ನಟಿ ಮಧುಬಾಲಾ ಎಂದಿನಂತೆ ಅಂದು ಬೆಳಗ್ಗೆ ನಿರಾತಂಕವಾಗಿ ಎದ್ದು ಹಲ್ಲುಜ್ಜಲು ಹೋದರು. ಆಗ ಅವರ ಬಾಯಲ್ಲಿ ರಕ್ತ ಕಂಡಿತು. ಅದು ಯಾವುದೋ ಹಲ್ಲು ಅಥವಾ ವಸಡಿನಿಂದ ಬಂದಿರಬಹುದೆಂದು ಮಧುಬಾಲ ಯೋಚಿಸಿದರು. ಆದರೆ ಸಮಸ್ಯೆ ಬೇರೆಯದು ಎಂದು ನಂತರ ಅವರು ಅರಿತುಕೊಂಡರು. ಈ ವಿಷಯ ತಿಳಿದ ನಟ ದಿಲೀಪ್ ಕುಮಾರ್ ಅವರು ನಟಿಯನ್ನು ವೈದ್ಯರ ಬಳಿ ತಪಾಸಣೆಗೆ ಕಳುಹಿಸಿದ್ದಾರೆ. ಅಲ್ಲಿ ಅವರ ಹೃದಯದಲ್ಲಿ ರಂಧ್ರವಿದೆ ಎಂದು ತಿಳಿದುಬಂದಿದೆ.
ಅಂದಹಾಗೆ ಮಧುಬಾಲಾ ಹಾಗೂ ದಿಲೀಪ್ ಕುಮಾರ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮಧುಬಾಲಾ ತಂದೆಗೆ ದಿಲೀಪ್ ಮತ್ತು ಮಧುಬಾಲಾ ಮದುವೆಯಾಗುವುದು ಇಷ್ಟವಿರಲಿಲ್ಲ. ಅವರ ಈ ಮೊಂಡುತನವು ನಟಿಯ ಎಲ್ಲಾ ಸಂತೋಷವನ್ನು ಕಸಿದುಕೊಂಡಿತು. ಮಧುಬಾಲಾ ತನ್ನ ತಂದೆಯ ವಿರುದ್ಧ ಹೋಗಲು ಬಯಸಲಿಲ್ಲ. ಆದ್ದರಿಂದ ಮಧುಬಾಲಾ ತಮ್ಮ ಪ್ರೀತಿಯನ್ನು ತ್ಯಾಗ ಮಾಡಬೇಕಾಯಿತು.

ಕೊನೆಗೆ ಮಧುಬಾಲಾ ತನ್ನ ಪ್ರೀತಿಯನ್ನು ಮರೆಯಲು ನಟ, ಗಾಯಕ ಕಿಶೋರ್ ಕುಮಾರ್ ಅವರನ್ನು ವಿವಾಹವಾದರು. ಆದರೆ ಕಿಶೋರ್ ಕುಮಾರ್ ಅವರಿಗೆ ಇದು ಎರಡನೇ ಮದುವೆ. ಮೂಲಗಳ ಪ್ರಕಾರ ಈ ಮದುವೆಯಿಂದ ಮಧುಬಾಲಾಗೆ ನೆಮ್ಮದಿ ಇರಲಿಲ್ಲ ಎನ್ನಲಾಗಿದೆ.
ಹೌದು , ಕಿಶೋರ್ ಕುಮಾರ್ ಸಾಕಷ್ಟು ಪ್ರಯಾಣಿಸುತ್ತಿದ್ದರು ಎಂದು ಅವರ ಸಹೋದರಿ ಮಧುರ್ ಭೂಷಣ್ ಹೇಳಿದ್ದಾರೆ. ಅವರು ಸದಾ ತಮ್ಮ ಧ್ವನಿಮುದ್ರಣಗಳಲ್ಲಿ ನಿರತರಾಗಿದ್ದರು. ಆದರೆ ಯಾವಾಗ ಮಧುಬಾಲಾ 2 ವರ್ಷಕ್ಕಿಂತ ಹೆಚ್ಚು ಬದುಕಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದರೋ ಆಗ ಆಕೆ ಒಬ್ಬರೇ ಅಳುತ್ತಿದ್ದರು.
ಇನ್ನೊಂದು ಮುಖ್ಯವಾದ ವಿಚಾರವೆಂದರೆ ಮಧುಬಾಲಾ ಕಿಶೋರ್ ಕುಮಾರ್ ಅವರನ್ನು ಕಂಡಾಗಲೆಲ್ಲ ಅಳಲು ತೋಡಿಕೊಳ್ಳುತ್ತಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಅಳುವುದು ಅವರ ಆರೋಗ್ಯ ಮತ್ತು ಹೃದಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಕಿಶೋರ್ ಕುಮಾರ್ ಮಧುಬಾಲಾ ಅವರ ಮುಂದೆ ನಗುತ್ತಾ ನಗಿಸಲು ಪ್ರಯತ್ನಿಸುತ್ತಿದ್ದರಂತೆ.
ಮಧುಬಾಲಾ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಆಕೆ ಬರೀ ಕಲ್ಲಾಗಿದ್ದರು. ಮಧುಬಾಲಾ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡು ಅಳುತ್ತಿದ್ದರು ಮತ್ತು ನಾನು ಏನಾಗಿದ್ದೇನೆ ಎಂದು ಪ್ರಶ್ನಿಸುತ್ತಿದ್ದರಂತೆ.
ಮಧುಬಾಲಾ ಅವರನ್ನು ಭೇಟಿ ಮಾಡಲು ಒಮ್ಮೆ ದಿಲೀಪ್ ಕುಮಾರ್ ಕೂಡ ಆಸ್ಪತ್ರೆಗೆ ತೆರಳಿದ್ದರು. ಆದರೆ ಈ ಭೇಟಿಯ ನಂತರ ದಿಲೀಪ್ ಕುಮಾರ್ ಸಾಯಿರಾ ಬಾನು ಅವರನ್ನು ವಿವಾಹವಾದರು ಮತ್ತು ಅವರು ಮತ್ತೆ ಭೇಟಿಯಾಗಲಿಲ್ಲ. ಈಗ ಮಧುಬಾಲ ಧೈರ್ಯ ಕಳೆದುಕೊಂಡಿದ್ದರು. ಕೆಲವು ವರ್ಷಗಳ ನಂತರ ಮಧುಬಾಲಾ ಜಗತ್ತಿಗೆ ವಿದಾಯ ಹೇಳಿದರು. ಕಿಶೋರ್ 1976 ರಲ್ಲಿ ನಟಿ ಯೋಗಿತಾ ಬಾಲಿ ಅವರನ್ನು ಮೂರನೇ ಬಾರಿಗೆ ವಿವಾಹವಾದರು. ಆದರೆ ಈ ಮದುವೆಯು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಎರಡು ವರ್ಷಗಳಲ್ಲಿ ಸಂಬಂಧವು ಮುರಿದುಬಿದ್ದಿತು.



