ಏಕದಿನ ವಿಶ್ವಕಪ್ ಗೆಲ್ಲುವ ಟೀಂ ಇಂಡಿಯಾದ ಭಾಗ್ಯದ ಬಾಗಿಲು ತೆಗೆದಂತೆ ಬಾಸ ಆಗುತ್ತಾ ಇದೆಯಾ?, ಹೌದು 12 ವರ್ಷಗಳ ಬಳಿಕ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯುತ್ತಾ ಇದೆ, ಅಕ್ಟೋಬರ್ 5 ರಿಂದ ಆರಂಭವಾಗುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಗೆ ತಂಡಗಳು ರೆಡಿಯಾಗುತ್ತಾ ಇದೆ. ಸಧ್ಯ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿ ಏಷ್ಯಾ ಕಪ್ ಟೂರ್ನಿಗೆ ರೆಡಿಯಾಗಬೇಕಾಗಿದೆ, ಆ ಬಳಿಕ ವಿಶ್ವಕಪ್ ಅಶ್ವಮೇಧಕ್ಕೆ ಟೀಂ ಇಂಡಿಯಾ ತಯಾರಿ ನಡೆಸಲಿದೆ, ಹಾಗೆ ನೋಡಿದರೆ ಈ ಬಾರಿಯ ವಿಶ್ವಕಪ್ ಗೆ ಟೀಂ ಇಂಡಿಯಾದ ಪೂರ್ವ ತಯಾರಿ ಅಷ್ಟೊಂದು ಸೀರಿಯಸ್ ಆಗಿ ಕಾಣಿಸುತ್ತಾ ಇಲ್ಲ.

ತಂಡದ ಕಾಂಬಿನೇಷನ್ ಬಗ್ಗೆ ಇನ್ನೂ ಕೂಡ ಗೊಂದಲ ಇದೆ, ಆದರೂ ಕೂಡ ಟೀಂ ಇಂಡಿಯಾ ತವರಿನ ಲಾಭ ಪಡೆದು ಮೂರನೇ ಬಾರಿ ಏಕದಿನ ವಿಶ್ವಕಪ್ ಅನ್ನು ಗೆಲ್ಲುವ ಕನಸನ್ನು ಕಾಣುತ್ತಾ ಇದೆ, ಇದಕ್ಕೆ ಪೂರಕವಾಗಿ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮ ಈ ಬಾರಿ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿ ಇದ್ದಾರೆ. ಮೂರನೇ ವಿಶ್ವಕಪ್ ಆಡುತ್ತಿರುವ ರೋಹಿತ್ ಶರ್ಮಾಗೆ ಇದು ಕೊನೆಯ ವಿಶ್ವಕಪ್ ಟೂರ್ನಿಯಾಗಿದೆ, ಇನ್ನು 2011 ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ವಿರಾಟ್ ಕೋಯ್ಲಿಗೂ ಇದು ಕಡೇಯ ವಿಶ್ವಕಪ್ ಹೀಗಾಗಿ ಈ ಬಾರಿ ಟ್ರೋಫಿ ಗೆಲ್ಲಲ್ಲೇ ಬೇಕು ಅನ್ನುವ ಹಠ ಟೀಂ ಇಂಡಿಯಾದು.

ಅಷ್ಟೇ ಅಲ್ಲ ಕೊಟ್ಯಾಂತರ ಭಾರತೀಯರ ಹೃದಯ ಬಡಿತ ಅದೇ ಆಗಿದೆ, ಅದು ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲ್ಲೇ ಬೇಕು ಅನ್ನುವುದು. ಅಂದಹಾಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಈ ಹಿಂದಿನ ವಿಶ್ವಕಪ್ ಟೂರ್ನಿಗಳ ಸಾಧನೆಗಳನ್ನು ನೆನಪು ಮಾಡಿಕೊಂಡಿದ್ದಾರೆ, 2003 ರಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಫೈನಲ್ ನಲ್ಲಿ ಎಡವಿದ್ದು, 2007 ರಲ್ಲಿ ಲೀಗಲ್ ನಲ್ಲೇ ನಿರಾಶೆ ಅನುಭವಿಸಿತ್ತು, ಆದರೆ 2011 ರಲ್ಲಿ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೆ ಏರಿತ್ತು, ಆದರೆ ‘ಈ ಪಂದ್ಯವನ್ನು ನಾನು ಮೈದಾನಕ್ಕೆ ಹೋಗಿ ನೋಡಲಿಲ್ಲ ಮುಖ್ಯವಾಗಿ ನಾನು ತಂಡದ ಭಾಗವಾಗಿರಲಿಲ್ಲ ಹೀಗಾಗಿ ಸ್ವಲ್ಪ ನಿರಾಶೆಯಾಗಿತ್ತು.
ಆದರೂ ಮನೆಯಲ್ಲೇ ಕುಳಿತು ಪಂದ್ಯವನ್ನು ವೀಕ್ಷಣೆ ಮಾಡಿದ್ದೆ, ಗೆಲುವಿನ ಸಂಭ್ರಮವನ್ನು ಆನಂದಿಸಿದೆ’ ಅಂತ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ, ಇನ್ನೂ 2015 ರಲ್ಲಿ ಮತ್ತು 2019 ರಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದೆ ಎರಡೂ ಟೂರ್ನಿಗಳಲ್ಲಿ ಸೆಮಿ ಫೈನಲ್ ನಲ್ಲಿ ಸೋಲನ್ನು ಅನುಭವಿಸಬೇಕಾಯಿತು, ಆದರೆ ಈ ಬಾರಿ ಮತ್ತೆ ತವರಿನಲ್ಲೇ ಏಕದಿನ ವಿಶ್ವಕಪ್ ಟೂರ್ನಿ ನಡೆಯುತ್ತಿದೆ, ತವರು ಅಭಿಮಾನಿಗಳ ಬೆಂಬಲದೊಂದಿಗೆ ಅವರ ನಿರೀಕ್ಷೆಗೆ ತಕ್ಕಂತೆ ಆಡಿ ಟ್ರೋಫಿ ಗೆಲ್ಲಲ್ಲೇ ಬೇಕು ಅನ್ನುವುದು ಅವರ ವಿಶ್ವಾಸದ ನುಡಿ.
ಇನ್ನು ರೋಹಿತ್ ಶರ್ಮಾ 2019 ರ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದರು, ಟೂರ್ನಿಯಲ್ಲಿ ಐದು ಶತಕಗಳನ್ನು ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು, ಅದೇ ರೀತಿ ಈ ಬಾರಿಯೂ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡುತ್ತಾರೆ ಅನ್ನುವ ನಂಬಿಕೆ ಕ್ರಿಕೆಟ್ ಅಭಿಮಾನಿಗಳದ್ದು. ‘ನನಗೆ ಗೊತ್ತು ತವರು ಅಭಿಮಾನಿಗಳು ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ, ಆಡುವ ಪ್ರತೀ ಮೈದಾನದಲ್ಲೂ ಟೀಂ ಇಂಡಿಯಾವನ್ನು ಬೆಂಬಲಿಸುವ ಅಭಿಮಾನಿಗಳಿದ್ದಾರೆ, ಅದಕ್ಕೆ ತಕ್ಕಂತೆ ನಾವು ರೆಡಿಯಾಗಬೇಕು.
ವಿಶ್ವಕಪ್ ಟೂರ್ನಿಯ ಪಂದ್ಯಗಳು ಟೆಸ್ಟ್ ಪಂದ್ಯದಂತೆ ಅಲ್ಲ, ಇಲ್ಲಿ ಪ್ರತೀ ದಿನ ಹೊಸದು, ಹೊಸ ಸವಾಲು, ಸವಾಲಿಗೆ ತಕ್ಕಂತೆ ನಾವು ಆಟವನ್ನು ಆಡಬೇಕು, ಆಗ ಮಾತ್ರ ಯಶಸ್ಸನ್ನು ಸಾಧಿಸೋಕೆ ಸಾಧ್ಯ’ ಅಂತ ರೋಹಿತ್ ಶರ್ಮಾ ಹೇಳಿದ್ದಾರೆ, ಒಟ್ಟಿನಲ್ಲಿ ಟೀಂ ಇಂಡಿಯಾ ಸೈಲೆಂಟಾಗಿಯೇ ವಿಶ್ವಕಪ್ ಸಮರಕ್ಕೆ ಸನ್ನದವಾಗುತ್ತಾ ಇದೆ, 12 ವರ್ಷಗಳ ನಂತರ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೆ ಏರಲಿ ಅನ್ನುವುದು ಕೋಟಿ ಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.