ಈ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಗಳು ಏನೇ ಹೇಳಿದರೂ ಅದು ಅತಿರೇಕಕ್ಕೆ ಹೋಗುತ್ತಾರೆ. ಒಂದೊಂದು ಮಾತುಗಳನ್ನು ದೊಡ್ಡದಾಗಿ ತೆಗೆದುಕೊಂಡು, ಒಂದೊಂದು ಮಾತಿಗೂ ಬೇರೆ ಬೇರೆ ಕಥೆಗಳನ್ನು ಕಟ್ಟಿ ದೊಡ್ದದಾಗಿ ಮಾಡುತ್ತಾರೆ. ಅದರಲ್ಲೂ ಈ ಫ್ಯಾನ್ ವಾರ್ ಗಳು ಅಂತೂ ನಡೆಯುತ್ತಲೇ ಇರುತ್ತದೆ. ಒಬ್ಬಸ್ ನಟನ ಫ್ಯಾನ್ಸ್ ಇನ್ನೊಬ್ಬ ನಟನನ್ನು ಟ್ರೋಲ್ ಮಾಡುತ್ತಾರೆ. ಇನ್ನೊಬ್ಬ ನಟನ ಹೇಳಿಕೆಗಳಿಗೆ ತಮ್ಮದೇ ರೀತಿಯಲ್ಲಿ ಬೇರೆಯದೇ ಅರ್ಥ ಕೊಡುತ್ತಾರೆ. ಇದೀಗ ನಟ ದರ್ಶನ್ ಅವರ ಅಭಿಮಾನಿಗಳು ಕೂಡ ಅದೇ ಕೆಲಸವನ್ನ ಮಾಡಿದ್ದಾರೆ.. ಡಿಬಾಸ್ ಫ್ಯಾನ್ಸ್ ಗಳು ಶಿವಣ್ಣ ಅವರು ನೀಡಿರುವ ಹೇಳಿಕೆಗೆ ಬೇರೆಯದೇ ಅರ್ಥ ನೀಡುವ ಮೂಲಕ ಶಿವಣ್ಣ ಅವರಿಗೆ ಪ್ರಶ್ನೆ ಕೇಳುವುದಕ್ಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ಶಿವಣ್ಣ ಅವರು ಹೇಳಿರುವುದು ಏನು? ದರ್ಶನ್ ಫ್ಯಾನ್ಸ್ ಕೋಪ ಮಾಡಿಕೊಂಡಿರುವುದು ಯಾಕೆ? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..

ಶಿವಣ್ಣ ಅವರು ಇತ್ತೀಚೆಗೆ ವಿವಾದಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಕಮಲ್ ಹಾಸನ್ ಅವರ ವಿಚಾರದಲ್ಲಿ ಆಫಾ ಘಟನೆ ನಮಗೆಲ್ಲಾ ಗೊತ್ತೇ ಇದೆ. ಕಮಲ್ ಹಾಸನ್ ಅವರು ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿದರೂ ಸಹ ಶಿವಣ್ಣ ಅವರು ಅಲ್ಲೇ ಇದ್ದು ಕಮಲ್ ಹಾಸುನ್ ಅವರಿಗೆ ಏನನ್ನು ಹೇಳಲಿಲ್ಲ, ಖಂಡಿಸಲಿಲ್ಲ, ಕಮಲ್ ಹಾಸನ್ ಅವರ ಬಗ್ಗೆ ಸಂತೋಷದಿಂದ ಮಾತನಾಡಿದರು, ಹಿಂದೆ ಡಾ. ರಾಜ್ ಕುಮಾರ್ ಅವರು ಇದ್ದಾಗ ಅವರು ಯಾವಾಗಲೂ ಕನ್ನಡದ ಪರವಾಗಿಯೇ ಇದ್ದರು. ಕನ್ನಡದ ಬಗ್ಗೆ ಯಾರೇ ನಾಲಿಗೆ ಹರಿಬಿಟ್ಟರು ಅಣ್ಣಾವ್ರು ಅವರನ್ನು ಸುಮ್ಮನೆ ಬಿಡುತ್ತಿರಲಿಲ್ಲ, ಸರಿಯಾದ ಉತ್ತರ ಕೊಟ್ಟು ಬರುತ್ತಿದ್ದರು, ಶಿವಣ್ಣ ಸುಮ್ಮನೆ ಬಂದಿದ್ದಾರೆ, ಶಿವಣ್ಣ ಮಾತನಾಡಬೇಕಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು.
ಈ ವಿವಾದ ಒಂದು ಕಡೆ ನಡೆಯುತ್ತಿದೆ. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಕೂಡ ಗುರಿಯಾಗುತ್ತಿದ್ದಾರೆ ಶಿವಣ್ಣ. ಇದಕ್ಕೆ ಕಾರಣ ಏನು ಎಂದರೆ, ಶಿವಣ್ಣ ಅವರು ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡಿರುವ 45 ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಗೊತ್ತೇ ಇದೆ. ಈ ಸಿನಿಮಾ ಆಗಸ್ಟ್ 15ರಂದು ತೆರೆ ಕಾಣಲಿದ್ದು, ಈಗಾಗಲೇ ಸಿನಿಮಾದ ಪ್ರೊಮೋಷನ್ ಶುರುವಾಗಿದೆ. ಟೀಸರ್ ಬಿಡುಗಡೆಯಾದ ನಂತರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮುಂಬೈ, ಚೆನ್ನೈ, ಹೈದರಾಬಾದ್, ಕೊಚ್ಚಿ ಎಲ್ಲಾ ಕಡೆ ಹೋಗಿ ಪ್ರಚಾರ ಮಾಡಿಕೊಂಡು ಬಂದಿತು ಚಿತ್ರತಂಡ. ಶಿವಣ್ಣ, ಉಪೇಂದ್ರ ಅವರು, ಅರ್ಜುನ್ ಜನ್ಯ ಅವರು ಎಲ್ಲರೂ ಸಹ ಜೊತೆಯಾಗಿ ಹೋದರು. ಪ್ರೈವೇಟ್ ವಿಮಾನದಲ್ಲಿ ಇಡೀ ತಂಡ ಎಲ್ಲಾ ಊರುಗಳಿಗೆ ಭೇಟಿ ನೀಡಿತು. ಈ ತಂಡದ ಜೊತೆಗೆ ಅನುಶ್ರೀ ಸಹ ಇದ್ದರು, ವಿಮಾನದ ಒಳಗೆ ಎಲ್ಲರ ಸಂದರ್ಶನ ಮಾಡಿದರು.

ಈ ವೇಳೆ ಶಿವಣ್ಣ ಅವರು ಕೆಲವು ಮಾತುಗಳನ್ನು ಆಡಿದರು.. “ಒಬ್ಬ ವ್ಯಕ್ತಿ ಇದ್ದಾಗಲೇ ಪ್ರೀತಿ ತೋರಿಸಿ, ಸತ್ತಮೇಲೆ ಏನಿದೆ.. ಒಬ್ಬ ವ್ಯಕ್ತಿ ಸಾಯುವವರೆಗೂ ಪ್ರೀತಿ ತೋರಿಸೋದಕ್ಕೆ ಕಾಯಬೇಕಾ..” ಎನ್ನುವ ಡೈಲಾಗ್ 45 ಸಿನಿಮಾದಲ್ಲಿದೆ, ಎಂಥಾ ಅರ್ಥಪೂರ್ಣವಾದ ಡೈಲಾಗ್ ಇದು. ಇದನ್ನ ನಾನು ಅಪ್ಪು ಅವರ ವಿಚಾರದಲ್ಲಿ ಮಾತ್ರ ಹೇಳ್ತಾ ಇಲ್ಲ. ಸಾಮಾನ್ಯವಾಗಿ ಎಲ್ಲರ ವಿಷಯದಲ್ಲಿ ಹೇಳ್ತಾ ಇರೋದು ಎಂದು ಶಿವಣ್ಣ ಹೇಳಿದರು. ಡಾ. ರಾಜ್ ಕುಮಾರ್ ಅವರ ವಿಚಾರದಲ್ಲಿ ಸಹ ಅದೇ ರೀತಿ, ಅವರು ಎಂಥಾ ಶ್ರೇಷ್ಠ ನಟ ಎಂದು ಎಲ್ಲರಿಗೂ ಗೊತ್ತೇ ಇದೆ, ಅವಫು ದೇಹ ತ್ಯಾಗ ಮಾಡಿದ ಮೇಲೆ ಅವರಿಗೆ ಇರುವ ಅಭಿಮಾನಿ ಬಳಗ ಇನ್ನು ಕೂಡ ಜಾಸ್ತಿ ಆಯಿತು. ಇವತ್ತಿಗೂ ಅಣ್ಣಾವ್ರ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಹೊರತು ಕಡಿಮೆ ಅಂತೂ ಆಗಿಲ್ಲ. ಇಡೀ ಕರ್ನಾಟಕವೇ ಅಣ್ಣಾವ್ರ ಅಭಿಮಾನಿಗಳು ಎಂದರು ತಪ್ಪಲ್ಲ..

ಇನ್ನು ಶಿವಣ್ಣ ಅವರು ಈ ರೀತಿ ಹೇಳುತ್ತಿದ್ದ ಹಾಗೆ, ದರ್ಶನ್ ಅವರ ಅಭಿಮಾನಿಗಳು ಕೋಪ ಗೊಂಡಿದ್ದಾರೆ. ಅದು ಯಾಕೆ ಎಂದರೆ, ಹಿಂದೆ ಕ್ರಾಂತಿ ಸಿನಿಮಾ ಬಿಡುಗಡೆಯ ವೇಳೆ ಪ್ರೊಮೋಷನ್ ಇದ್ದಾಗ, ದರ್ಶನ್ ಅವರು ಸಹ ಇದೇ ರೀತಿಯ ಮಾತುಗಳನ್ನು ಆಡಿದ್ದರು. ವ್ಯಕ್ತಿ ಇದ್ದಾಗ ಪ್ರೀತಿಸಿ, ಸಾಯೋವರೆಗೂ ಕಾಯಬೇಡಿ ಎನ್ನುವ ಅರ್ಥದಲ್ಲೇ ದರ್ಶನ್ ಅವರು ಹೇಳಿಕೆ ಕೊಟ್ಟಿದ್ದರು, ಆಗ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಕೋಪಗೊಂಡು, ದರ್ಶನ್ ಅವರು ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದಿದ್ದರು. ಈಗ ಶಿವಣ್ಣ ಅವರೇ ಈ ರೀತಿಯ ಹೇಳಿಕೆ ನೀಡಿದ್ದಾರೆ. ಹಾಗಾಗಿ ದರ್ಶನ್ ಅವರ ಅಭಿಮಾನಿಗಳು ಶಿವಣ್ಣ ಅವರು ಹೇಳಿದ್ದೇನು ಕಡಿಮೆ ಇಲ್ಲ, ಅವರು ಕೂಡ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆಗ ದರ್ಶನ್ ಅವರು ಆಡಿದ ಮಾತುಗಳು, ಇಂದು ಶಿವಣ್ಣ ಆಡಿದ ಮಾತುಗಳು ಎರಡನ್ನು ಸೇರಿಸಿ, ಎಡಿಟ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ..

ಶಿವಣ್ಣ ಅವರು ಈಗ ಕ್ಷಮೆ ಕೇಳಬೇಕು ಅನ್ನೋ ವಿಚಾರ ವೈರಲ್ ಆಗಿದ್ದು, ಶಿವಣ್ಣ ಅಭಿಮಾನಿಗಳ ಮಾತಿನ ಅನುಸಾರ ಕ್ಷಮೆ ಕೇಳುತ್ತಾರಾ ಎಂದು ಕಾದು ನೋಡಬೇಕಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಆಗುವುದು ಕಾಮನ್ ಆಗಿದೆ. ಮೊದಲೆಲ್ಲಾ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಎಷ್ಟೇ ಪ್ರೀತಿ ಕೊಟ್ಟರೂ, ಇನ್ನೊಬ್ಬ ನಟನ ಬಗ್ಗೆ ಯಾರೂ ಕೂಡ ಕೆಟ್ಟದಾಗಿ ಮಾತನಾಡುತ್ತಾ ಇರಲಿಲ್ಲ. ಇನ್ನೊಬ್ಬ ನಟನ ಬಗ್ಗೆ ಗೌರವ ಕೊಡುತ್ತಿದ್ದರು, ಅವರಿಗೂ ಫ್ಯಾನ್ ಬೇಸ್ ಇದೆ ಎಂದು ಅರ್ಥ ಮಾಡಿಕೊಳ್ಳುತ್ತಿದ್ದರು. ಆಗಿನ ಕಾಲದಲ್ಲಿ ಸೋಷಿಯಲ್ ಮೀಡಿಯಾ ಇರಲಿಲ್ಲ, ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ಕಲಾವಿದರ ಬಗ್ಗೆ ಅಪ್ಡೇಟ್ ಸಿಗುತ್ತಾ ಇದ್ದಿದ್ದು, ನ್ಯೂಸ್ ಪೇಪರ್ ಗಳು ಮ್ಯಾಗಜಿನ್ ಗಳು ಅಥವಾ ಟಿವಿಯ ಮೂಲಕ ಮಾತ್ರ. ಆದರೆ ಈಗ ಹಾಗಿಲ್ಲ ಎಲ್ಲಾ ಮಾಹಿತಿಗಳು ಬೆರಳ ತುದಿಯಲ್ಲೇ ಸಿಗುತ್ತದೆ.
ಅದೇ ರೀತಿ ಎಷ್ಟು ಮಾಹಿತಿ ಸಿಗುತ್ತೋ, ಅದೇ ರೀತಿ ಯಾರು ಬೇಕಾದರೂ ಏನನ್ನು ಬೇಕಾದರೂ ಹೇಳುವ, ಪೋಸ್ಟ್ ಮಾಡುವ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ ಇದೆ. ಎಲ್ಲರೂ ಇದರ ಸದುಪಯೋಗ ಮಾಡಿಕೊಳ್ಳುವುದಿಲ್ಲ. ಕೆಲವರು ಬೇಕೆಂದೇ ಕೆಟ್ಟದಾಗಿ ಮಾತನಾಡುವ ಚಟವನ್ನು ಹೊಂದಿದ್ದಾರೆ, ಅಂಥವರಿಂದಲೇ ಹೀಗೆಲ್ಲಾ ಆಗುತ್ತದೆ. ಒಟ್ಟಿನಲ್ಲಿ ಸಿನಿಮಾ ಕಲಾವಿದರಿಗೆ ಇದರಿಂದ ನೆಮ್ಮದಿಯೇ ಇಲ್ಲದ ಹಾಗೆ ಅನ್ನಿಸುವುದಂತೂ ನಿಜ.



