ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿರುವ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರ ಮನೆಗೆ ಬುಧವಾರ ತಡರಾತ್ರಿ ದಾಳಿಕೋರನೊಬ್ಬ ನುಗ್ಗಿ ಕಳ್ಳತನದ ಯತ್ನದ ವೇಳೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಸೈಫ್ ತೀವ್ರವಾಗಿ ಗಾಯಗೊಂಡಿದ್ದಾರೆ. 54 ವರ್ಷದ ಸೈಫ್ ಅವರನ್ನು ಚಿಕಿತ್ಸೆಗಾಗಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ದಾಳಿಯ ನಂತರ ಮುಂಬೈ ಪೊಲೀಸ್ ಅಧಿಕಾರಿಗಳು ಬಾಂದ್ರಾ ವೆಸ್ಟ್ನಲ್ಲಿರುವ ಸೈಫ್ ಅಲಿ ಖಾನ್ ಅವರ ಮನೆಯನ್ನು ತಲುಪಿದರು. ಈ ಅಧಿಕಾರಿಗಳ ಪೈಕಿ ಖ್ಯಾತ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಕೂಡ ಸೇರಿದ್ದಾರೆ.
ದಯಾ ನಾಯಕ್ ಯಾಕೆ ಸುದ್ದಿಯಲ್ಲಿದ್ದಾರೆ?
ಮುಂಬೈನ ಭೂಗತ ಪಾತಕಿಗಳ ವಿರುದ್ಧ ನಡೆಸಿದ ಹಲವಾರು ಕಾರ್ಯಾಚರಣೆಗಳಿಂದಾಗಿ ದಯಾ ನಾಯಕ್ ಅವರ ಹೆಸರು ಚರ್ಚೆಗೆ ಬಂದಿದೆ. 1990 ರ ದಶಕದಲ್ಲಿ 80 ಕ್ಕೂ ಹೆಚ್ಚು ದರೋಡೆಕೋರು ಅವರ ಬುಲೆಟ್ಗಳಿಗೆ ಗುರಿಯಾಗಿದ್ದಾರೆ. ಕರ್ನಾಟಕದ ಉಡುಪಿ ಜಿಲ್ಲೆಯ ಕೊಂಕಣಿ ಮಾತನಾಡುವ ಕುಟುಂಬದಲ್ಲಿ ಜನಿಸಿದ ದಯಾ ನಾಯಕ್ ಅವರು ಕನ್ನಡ ಮಾಧ್ಯಮ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. 7 ನೇ ತರಗತಿಯವರೆಗೆ ಓದಿದ ನಂತರ, ಅವರು ತಮ್ಮ ಕುಟುಂಬಕ್ಕೆ ಸಹಾಯ ಮಾಡಲು 1979 ರಲ್ಲಿ ಮುಂಬೈಗೆ ತೆರಳಿದರು.
ಮುಂಬೈನ ಹೋಟೆಲ್ನಲ್ಲಿ ಕೆಲಸ
ತಮ್ಮ ಕುಟುಂಬವನ್ನು ಪೋಷಿಸಲು ಮುಂಬೈನಲ್ಲಿ ಅವರು ಹೋಟೆಲ್ನಲ್ಲಿಯೂ ಕೆಲಸ ಮಾಡಿದರು. ಅದೇ ರೀತಿ ಮುನ್ಸಿಪಲ್ ಶಾಲೆಯಲ್ಲಿ 12ನೇ ತರಗತಿವರೆಗೆ ಓದಿದ್ದಾರೆ. ಇದರ ನಂತರ ಅವರು ಅಂಧೇರಿಯ ಸಿಇಎಸ್ ಕಾಲೇಜಿನಲ್ಲಿ ಪದವಿ ಪಡೆದರು. ಕಾಲೇಜು ದಿನಗಳಲ್ಲಿ ನಾರ್ಕೋಟಿಕ್ಸ್ ವಿಭಾಗದ ಕೆಲವು ಅಧಿಕಾರಿಗಳನ್ನು ಭೇಟಿ ಮಾಡಿದ ನಂತರವೇ ದಯಾ ನಾಯಕ್ ಪೊಲೀಸ್ ಸೇರುವ ಕನಸನ್ನು ನನಸು ಮಾಡಿಕೊಂಡಿದ್ದರು. 1995 ರಲ್ಲಿ ಪೊಲೀಸ್ ಅಕಾಡೆಮಿಯಿಂದ ಪದವಿ ಪಡೆದ ನಂತರ, ಅವರು ಜುಹು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಆಗಿ ನೇಮಕಗೊಂಡರು. ಆಗ ಮುಂಬೈನಲ್ಲಿ ಭೂಗತ ಜಗತ್ತಿನ ಪ್ರಭಾವ ಗರಿಷ್ಠವಾಗಿತ್ತು.
ವಿವಾದಗಳೊಂದಿಗೆ ಆಳವಾದ ಸಂಪರ್ಕ
ಜನಪ್ರಿಯತೆಯ ಮೆಟ್ಟಿಲು ಏರುತ್ತಿರುವಾಗಲೇ ದಯಾ ನಾಯಕ್ ಅವರನ್ನು ಹಲವು ವಿವಾದಗಳು ಕೂಡ ಸುತ್ತುವರಿದಿದ್ದವು. 2004 ರಲ್ಲಿ, ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ನ್ಯಾಯಾಲಯವು ಅವರ ಆಸ್ತಿಯನ್ನು ತನಿಖೆ ಮಾಡಲು ಭ್ರಷ್ಟಾಚಾರ ವಿರೋಧಿ ಬ್ಯೂರೋ (ACB) ಗೆ ಆದೇಶ ನೀಡಿತು. ಎಸಿಬಿ 6 ಕಡೆ ದಾಳಿ ನಡೆಸಿದ್ದು, 2 ಪಾಪರ್ಟಿ ಬೆಂಗಳೂರಿನಲ್ಲಿವದೆ. ಈ ದಾಳಿಯ ವೇಳೆ, ದಯಾ ನಾಯಕ್ ಅವರು ವಿಶಾಲ್ ಟ್ರಾವೆಲ್ಸ್ ಎಂಬ ಟ್ರಾವೆಲ್ ಏಜೆನ್ಸಿಯ ಮಾಲೀಕರಾಗಿದ್ದು, ಇದು ಅನೇಕ ಐಷಾರಾಮಿ ಬಸ್ಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಅವರ ಬಸ್ಸುಗಳು ಕರ್ನಾಟಕದ ಕಾರ್ಕಳ ನಗರದಲ್ಲಿ ಓಡಾಡುತ್ತವೆ ಎಂದು ಹೇಳಲಾಗಿದೆ.
ಮೊದಲು ಬಂಧನ, ನಂತರ ಬಿಡುಗಡೆ
ಇದೆಲ್ಲದರ ನಡುವೆ ದಯಾ ನಾಯಕ್ ನನ್ನು ಎಸಿಬಿ ಬಂಧಿಸಿತ್ತು. ಆದರೆ, 2012ರಲ್ಲಿ ಮತ್ತೆ ಪೊಲೀಸ್ ಸೇವೆಗೆ ಸೇರ್ಪಡೆಗೊಂಡು ಹೆಚ್ಚುವರಿ ಪೊಲೀಸ್ ಕಮಿಷನರ್ ಹುದ್ದೆಗೆ ನೇಮಕಗೊಂಡರು. ದಯಾ ನಾಯಕ್ ಅವರ ಹೆಸರನ್ನು ಮುಂಬೈ ಪೊಲೀಸ್ ಇತಿಹಾಸದಲ್ಲಿ ಪ್ರಸಿದ್ಧ ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ತೆಗೆದುಕೊಳ್ಳಲಾಗಿದೆ. ಮುಂಬೈನಿಂದ ಭೂಗತ ಜಗತ್ತನ್ನು ನಿರ್ಮೂಲನೆ ಮಾಡುವಲ್ಲಿ ಅವರು ಪ್ರಮುಖ ಕೊಡುಗೆಯನ್ನು ಹೊಂದಿದ್ದಾರೆಂದು ಪರಿಗಣಿಸಲಾಗಿದೆ.