ತಮಿಳು ನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಮಾಡಿರುವ ಆರುಮುಗಸ್ವಾಮಿ ಕಮೀಷನ್ 608 ಪುಟಗಳ ವರದಿಯನ್ನು ಸಲ್ಲಿಸಿದೆ.
2016ರ ಸೆಪ್ಟೆಂಬರ್ ತಿಂಗಳಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಜಯಲಲಿತಾ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಹಿಡಿದು ಅವರ ಸಾವಿನ ವರೆಗೂ ಅವರಿಗೆ ನೀಡಲಾದ ಚಿಕಿತ್ಸೆ, ಅವರ ಆರೋಗ್ಯದಲ್ಲಾದ ಬದಲಾವಣೆಗಳು ಎಲ್ಲದರ ಕುರಿತು ಆಯೋಗ ವಿಚಾರಣೆ ನಡೆಸಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ವರದಿ ನೀಡಿದ್ದರು. ಇಂದು ತಮಿಳುನಾಡು ವಿಧಾಸಭೆಯಲ್ಲಿ ಎಂ ಕೆ ಸ್ಟಾಲಿನ್ ಆಯೋಗದ ವರದಿಯನ್ನು ಪ್ರಸ್ತುತ ಪಡಿಸಿದ್ದಾರೆ.
ಜಯಲಲಿತಾ 2016ರ ಡಿಸೆಂಬರ್ 5ರಂದು ಮೃತಪಟ್ಟಿದ್ದರು. ಆರುಮುಗಸ್ವಾಮಿ ಆಯೋಗವನ್ನು ಹಿಂದಿನ ಎಐಎಡಿಎಂಕೆ ಸರ್ಕಾರ 2017ರ ನವೆಂಬರ್ 22ರಂದು ರಚಿಸಿತ್ತು. ಮಡ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರುಮುಗಂ ಅವರು ಆಯೋಗದ ಮುಖ್ಯಸ್ಥರಾಗಿ ತನಿಖೆ ನಡೆಸಿದರು. ಇದಾದ ಸುಮಾರು ಐದು ವರ್ಷಗಳ ನಂತರ ಇದೀಗ ಆಯೋಗ ವರದಿ ನೀಡಿದೆ. ಇದರಿಂದ ಶಶಿಕಲಾ ಮತ್ತು ಇತರ ಆರೋಪಿಗಳ ವಿರುದ್ಧ ಶೀಘ್ರ ತನಿಖೆಯಾಗುವ ಸಾಧ್ಯತೆಯಿದೆ.
ಜಯಲಲಿತಾ ಅವರ ಸಾವಿನಲ್ಲಿ ವಿರೋಧಾಭಾಸವಿದೆ. ಜಯಲಲಿತಾ ಡಿ.ಸಿ. ಅವರು ಡಿಸೆಂಬರ್ 5 ರಂದು ನಿಧನರಾದರು ಎಂದು ಆಸ್ಪತ್ರೆ ತಿಳಿಸಿದೆ. ಜಯಲಲಿತಾ ಅವರು 4ನೇ ತಾರೀಖಿನಂದು ನಿಧನರಾದರು ಎಂದು ವರದಿಯಲ್ಲಿ ಉಲ್ಲೇಖಿಸಿರುವುದರಿಂದ ಅವರ ಮರಣವನ್ನು ಘೋಷಿಸುವಲ್ಲಿ ಉದ್ದೇಶಪೂರ್ವಕ ವಿಳಂಬವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಅಂತ ತಿಳಿಸಲಾಗಿದೆ ಆರುಮುಗಸ್ವಾಮಿ ಆಯೋಗದ ವರದಿಯ ಪ್ರಕಾರ, ಶಶಿಕಲಾ ಮತ್ತು ಜಯಲಲಿತಾ ನಡುವೆ ಸೌಹಾರ್ದಯುತ ಸಂಬಂಧವಿಲ್ಲದ ಕಾರಣ ವೈಯಕ್ತಿಕ ಲಾಭಕ್ಕಾಗಿ ಜಯಲಲಿತಾ ಅವರ ಆಂಜಿಯೋಪ್ಲ್ಯಾಸ್ಟಿಯನ್ನು ಶಶಿಕಲಾ ತಡೆದಿರಬಹುದು.
ಎನ್ನಲಾಗಿದೆ.
ಜಯಲಲಿತಾ ಅವರ ಸಾವಿನ ದಿನದಿಂದಲೂ ಶಶಿಕಲಾ ಅವರ ಮೇಲೆ ಶಂಕೆ ಕೇಳಿಬಂದಿತ್ತು. ಜಯಲಲಿತಾ ಅವರಿಗೆ ಹಲವು ದಿನಗಳಿಂದ ವಿಷವನ್ನು ನಿಧಾನವಾಗಿ ಶಶಿಕಲಾ ಕೊಡುತ್ತಾ ಬಂದಿದ್ದರು ಎಂಬ ಆರೋಪಗಳು ಕೇಳಿ ಬಂದಿತ್ತು. ಈಗ ಈ ಆರೋಪಗಳು ವರದಿಯಲ್ಲಿ ದೃಢಪಟ್ಟಿವೆ.
ಜಯಲಲಿತಾ ಅವರ ಸಾವಿನ ಕುರಿತು ಆಯೋಗ ಸುದೀರ್ಘ ವರದಿಯನ್ನು ನೀಡಿದ್ದು, ಈ ಪ್ರಕರಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿ ಮತ್ತು ವಿ.ಕೆ.ಶಶಿಕಲಾ ವಿರುದ್ಧ ಗಂಭೀರವಾದ ಆರೋಪದ ಬಗ್ಗೆ ಟಿಪ್ಪಣಿ ನೀಡಿರುವುದಾಗಿ ವರದಿ ವಿವರಿಸಿದೆ